Archive for August, 2010

ಜ್ವಲಂತ ಆಧ್ಯಾತ್ಮಿಕ ಜ್ಯೋತಿ

Wednesday, August 4th, 2010 - - 0 Comment

ಲೇಖಕರು: ಶ್ರೀಸುಬೋಧ ಎಂ. ರಾಮರಾವ, ಬೆಂಗಳೂರು ೧೯೫೧ನೆಯ ಸಂವತ್ಸರದ ಒಂದು ಸಂಧ್ಯಾಕಾಲ, ಶ್ರೀಪೇಜಾವರ ಶ್ರೀಪಾದಂಗಳವರ ಪ್ರಥಮ ಸಂದರ್ಶನ ನನಗಾದ ಸುದಿನವದು. ಶ್ರೀ ಶ್ರೀವಿಶ್ವೇಶತೀರ್ಥ ಶ್ರೀಪಾದಂಗಳವರು, ಪರಮಪೂಜ್ಯ ಶ್ರೀಭಂಡಾರಕೇರಿ ಶ್ರೀಪಾದಂಗಳವರ ಬಳಿ, ತಮ್ಮ ಸಚ್ಛಾಸ್ತ್ರ ವ್ಯಾಸಂಗ ಮುಗಿಸಿ, ಮಂಗಳ ಮಹೋತ್ಸವ ನಡೆಸಿ ಗುರುಪೂಜಾ ಸಲ್ಲಿ ಸಿದಾಗ, ಸಂತುಷ್ಟರಾದ ಆ ಗುರುವರ್ಯರು ತಾವು ಪಂಡಿತರಾಗಿದ್ದೀರಿ. ಇನ್ನು ಸ್ವತಂತ್ರ ಸಂಚಾರ ಕೈಕೊಂಡು ಶ್ರೀಮದಾಚಾರ್ಯರ ಸತ್ಸಿದಾಟಛಿಂತ ಪ್ರಚಾರ ಕಾರ್ಯದಲ್ಲಿ ತೊಡಗಬಹುದು’ ಎಂದಿತ್ತ ಮಹತ್ಸಂದೇಶವನ್ನು ಶಿರಸಾ ಸ್ವೀಕಾರಮಾಡಿ ಹೊರಟ ಪ್ರಥಮಸಂಚಾರವದು. ಶ್ರೀಶ್ರೀಗಳವರ ಈ ಪ್ರಥಮ [...]

ಆದರ್ಶ ಗುರುಪುಂಗವ ಶ್ರೀಪೇಜಾವರ ಮಠಾಧೀಶ್ವರರು

Wednesday, August 4th, 2010 - - 0 Comment

ಲೇಖಕರು: ಪದ್ಮಶ್ರೀ ಶಿವಮೂರ್ತಿ ಶಾಸ್ತ್ರಿಗಳು,ಬೆಂಗಳೂರು “ಕನ್ನಡನಾಡು, ಸುಕೃತ ಬೀಡು, ಧರ್ಮದ ಗೂಡು, ನೀತಿಯಜಾಡು” ಎಂದು ಮೊದಲಾಗಿ ಕಬ್ಬಿಗರಿಂದ ಬಣ್ಣಿಸಲ್ಪಟ್ಟಿದೆ. ಹೀಗೆ ಕರ್ನಾಟಕಕ್ಕೆ ಮಿಗಿಲಾದ ಕೀರ್ತಿ ಬರಲು ಈ ನಾಡಿನ ತಪೋಧನರಾದ ಮಠಾಶ್ವರರು ಕಾರಣಕರ್ತರಾಗಿದ್ದಾರೆ.ಸುಕ್ಷೇತ್ರ ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶ್ರೀಪೇಜಾವರಮಠವು ನಾರಾಯಣನ ವಕ್ಷ ಸ್ಥಳದಲ್ಲಿ ಕಂಗೊಳಿಸುವ ಕೌಸ್ತುಭ ಮಣಿಯಂತೆ ಮಿಗಿಲಾದ ಕಾಂತಿಯಿಂದ ಕಂಗೊಳಿಸುತ್ತಿದೆ. ಇದಕ್ಕೆ ಕಾರಣ ಇಂದು ಶ್ರೀಮಠಕ್ಕೆ ಅಧ್ಯಕ್ಷರಾಗಿರುವ ತಪೋಧನ ಶ್ರೀಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು. ಪರಮಪೂಜ್ಯರಾದ ಶ್ರೀವಿಶ್ವೇಶತೀರ್ಥಶ್ರೀಪಾದಂಗಳವರು ನಿಜಕ್ಕೂ ಕರ್ಮಯೋಗಿಗಳು.ಅದಕ್ಕೆ ಉದಾಹರಣೆಯಾಗಿ ಅವರು ಸ್ಥಾಪಿಸಿರುವ ಅಖಿಲಭಾರತ ಮಾಧ್ವ [...]

ಲೋಕ ಪಾವನ ಶಕ್ತಿ

Wednesday, August 4th, 2010 - - 0 Comment

ಲೇಖಕರು: ಶ್ರೀಕೃಷ್ಣಮೂರ್ತಿ ಪುರಾಣಿಕ “ದೊಡ್ಡವರದೆಲ್ಲವೂ ದೊಡ್ಡದೆನ್ನುವ ಮಾತು ಸುಳ್ಳಲ್ಲ” ಎಂಬುದು ಕವಿಯಾಡಿದ ಮಾತು. ಇದರ ಪ್ರತ್ಯಕ್ಷ ನಿದರ್ಶನವಾದದ್ದು ನನಗೆ ಶ್ರೀವಿಶ್ವೇಶತೀರ್ಥಪಾದಂಗಳವರು ಗೋಕಾಕಕ್ಕೆ ಬಂದಾಗ. ಸರ್ವಸಂಗ ಪರಿತ್ಯಾಗಮಾಡಿ ಸನ್ಯಾಸಿಗಳಾದರೂ ಜನತೆಯ ಕಲ್ಯಾಣಕ್ಕಾಗಿ ಅವರು ದುಡಿಯುತ್ತಿರುವ ಮಹತಿಯನ್ನು ನಾನು ಕೇಳಿದ್ದೆ. ಸನ್ಯಾಸಿಗಳಾದ ಅವರು ಕಟ್ಟಿಕೊಂಡ ಈ ಸಾಮಾಜಿಕ ಸಂಸಾರದ ಬಗ್ಗೆ ನನಗೆ ಅತ್ಯಂತ ಕುತೂಹಲವೂ ಆಗಿತ್ತು. ಈ ಮುನಿವೃತ್ತಿಯ ಒಳಹೊಕ್ಕು ನೋಡಬೇಕೆಂಬ ಅಪೇಕ್ಷೆ ನನ್ನದಾಗಿತ್ತು. ಅವರ ಚಿತ್ತಶೋಧನೆಯ ಸಾಧನವನ್ನು ನಾನು ಅಳೆಯಬೇಕಾಗಿತ್ತು. ಚಿತ್ತಶೋಧನೆಯು ಮತಿಚಮತ್ಕಾರವಲ್ಲವೆಂಬುದು ನನಗೆ ಅರಿತ ಮಾತಾಗಿತ್ತು.` ಬಿತ್ತರದ [...]

ನಾ ಕಂಡ ಪರಮಪೂಜ್ಯ ಶ್ರೀಪಾದಂಗಳು

Wednesday, August 4th, 2010 - - 0 Comment

ಲೇಖಕರು : ಶ್ರೀಮಾನ್ವಿ ನರಸಿಂಗರಾಯರು ಎಂ.ಎ. ಹೈದರಾಬಾದ (ಹೈದರಾಬಾದ್ ಕರ್ಣಾಟಕದಲ್ಲಿ ಬೆಳಕನ್ನು ಬಡಿದೆಬ್ಬಿಸಿದ ಜಾಗೃತಿಯ ದೂತರಲ್ಲಿ ಶ್ರೀನರಸಿಂಗರಾಯರು ಅಗ್ರೇಸರರು. ಸಾಹಿತ್ಯ, ರಾಜಕಾರಣ, ಕನ್ನಡ ಚಳುವಳಿ ಹಾಗೂ ಧರ್ಮ ಜಾಗೃತಿ ಹೀಗೆ ಚತುರ್ಮುಖ ಚಟುವಟಿಕೆಗಳಿಂದ ಮೊಗಲಾಯಿತನದ ಮುಸುಕೆಳೆದು ಮಲಗಿದ್ದ ಅಚ್ಚ ಕನ್ನಡ ಭಾಗದಲ್ಲಿ eನದ ನಸಕು ಹರಿದು ಚೈತನ್ಯ ಮಿಸುಕಾಡುವಂತೆ ಮಾಡಿದ ಶ್ರೀ ಮಾನ್ವಿಯವರು ವಾಗ್ದೇವಿಯ ಚರಣಚಾರಣರಾಗಿದ್ದಾರೆ. ಅವರ ಹೃದಯದಂತೆ ಮಾತು ಮಿದು, ವಿನಯದ ಗವಸಣಿಕೆಯಲ್ಲಿ ಬಿಗಿದಿಟ್ಟರೂ ಅವರ ವಿದ್ಯೆಯ ವೀಣೆಯು ಸಪ್ತಸ್ವರಗಳನ್ನೆಲ್ಲ ಝೇಂಕರಿಸುತ್ತದೆ. ಈಗ ಉಸ್ಮಾನಿಯಾ ವಿಶ್ವವಿದ್ಯಾಲಯದ [...]

ನಾ ಕಂಡ ಶ್ರೀಗಳವರು

Wednesday, August 4th, 2010 - - 0 Comment

ಶ್ರೀ.ಕೆ.ಎಚ್.ಪಾಟೀಲ, M.L.A (Gadag) ಸಂಪಾದಕ- ವಿಶಾಲ ಕರ್ನಾಟಕ ಹುಬ್ಬಳ್ಳಿ ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀ ಶ್ರೀಗಳವರ ಚರಿತ್ರೆಯನ್ನು ಕೇಳುವಾಗ, ಹೇಳುವಾಗ, ನೆನೆಯುವಾಗ ಅತ್ಯಂತ  ಆನಂದಪಡುವ ಅಸಂಖ್ಯಾತಜನರಲ್ಲಿ ನಾನೊಬ್ಬ. ಅಷ್ಟಮಠದ ಶ್ರೀಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯವರು ತಮ್ಮ ಅಸ್ಖಲಿತವಾದ ಮಧುರವಾಣಿಯಿಂದಲೂ, ಅಗಾಧವಾದ ಪಾಂಡಿತ್ಯದಿಂದಲೂ, ಅಸಾಧಾರಣವಾದ ಸಂಸ್ಕೃತ   eನಭಾಂಡಾರದಿಂದಲೂ ಕೀರ್ತಿಶಾಲಿಗಳಾಗಿದ್ದೇನೋ ನಿಜ. ಆದರೆ ನಾನು ಕಂಡಂತೆ ಈ ಸ್ವಾಮೀಜಿಯವರ ರೀತಿ, ನೀತಿ ಮತ್ತು ನಡವಳಿಕೆಗಳು ಅದ್ವಿತೀಯವಾಗಿವೆ. “ಜನಸೇವೆಯೇ ಜನಾರ್ದನನ ಸೇವೆ ” ಎಂಬ ಮಂತ್ರವನ್ನು ಉಪದೇಶದೊಡನೆ ಕಾರ್ಯಾಚರಣೆಗೆ ತಂದ ಪ್ರಭುಗಳು [...]

ಪೇಜಾವರ ಶ್ರೀಗಳವರಿಗೆ ಪರ್ಯಾಯ ಪುಷ್ಪ

Wednesday, August 4th, 2010 - - 0 Comment

(“ಗೀತಾಸಾರೋದಾಟಛಿರ” ಪ್ರಕಟನೆಯ ಮಧುರ ಸಂದರ್ಭದ ಒಂದು ಸವಿನೆನಪು) ದ್ವಾಪರ ಭೂಪರ ಚಂಡಪ್ರತಾಪರ ಚಾಪದ ನೂಪರ ನುಡಿದಿತ್ತು ? ಕೌರವ ಪಾಂಡವ ಭೈರವ ಸಂಗರ ಜೀವನಶಾಂತಿಯ ಕದಡಿತ್ತು ? ಪಾಂಡವ ನಂದನ ಸ್ಯಂದನ ಸೂತ್ರವ ಗೋವಿಂದನ ಕೈ ಹಿಡಿದಿತ್ತು ವಿಶ್ವದ ರಥಪತಿ ಅಶ್ವದ ಜಟಕಾ ಹೊಡೆಯುವ ನಾಟಕ ನಡೆದಿತ್ತು ಎಲ್ಲೆಡೆ ಬಾಂಧವ ಬಳ್ಳಿಯ ತಳಕನು ನೋಡಿದ ನನ್ನೆದೆ ತುಡಿದಿತ್ತು ಕರುಳಿನ ಮಡಿಲಲಿ ಕರಗಸವಾಡಿಸಲಾರದೆ ಕಣ್‌ಧ್ರವ ವೊಡೆದಿತ್ತು ಪಾಂಡವನಲಿ ಭಯ ತಾಂಡವವಾಡಲು ಗಾಂಡಿವಧನು ನೆಲ ಹಿಡಿದಿತ್ತು ದೇವದತ್ತ ನರಶಂಖವು ದುಃಖದಿ [...]

ಶ್ರೀಭಂಡಾರಕೇರಿ ಶ್ರೀಗಳು ಕಂಡ-ಜ್ಞಾನದ ಭಾಂಡಾರ

Wednesday, August 4th, 2010 - - 0 Comment

ಅನುಗ್ರಹಿಸಿದವರು: ಶ್ರೀ ಶ್ರೀ ಭಂಡಾರಕೇರಿ ಶ್ರೀಪಾದಂಗಳವರು ಅಖಿಲ ಭಾರತ ಮಾಧ್ವ ಮಹಾ ಮಂಡಳದ ಅಧ್ಯಕ್ಷರು ಶ್ರೀವಿಶ್ವೇಶತೀರ್ಥರು ಹತ್ತು ವರ್ಷದ ಚಿಕ್ಕಬಾಲಕರಿರುವಾಗಲೇ ಸಂಸ್ಕೃತ ಸಾಹಿತ್ಯ ದಲ್ಲಿ ಒಳ್ಳೇ ಮೇಧಾವಿಗಳಾಗಿದ್ದರು. ಅರ್ಧಗಂಟೆಯ  ಅಲ್ಪಕಾಲದಲ್ಲಿ ನಾನಾವೃತ್ತಾಲಂಕಾರ. ಅರ್ಥಗೌರವಗಳಿಂದ ಕೂಡಿದ ಹತ್ತೆಂಟು ಶ್ಲೋಕಗಳನ್ನು ಪ್ರೌಢ ಸಂಸ್ಕೃತದಲ್ಲಿ ಅನಾಯಾಸವಾಗಿ ರಚಿಸುತ್ತಿದ್ದರು. ಇತರ ಸಾಹಿತ್ಯ ಪಂಡಿತರು ಇಡೀ ದಿನ ಪ್ರಯತ್ನಪಟ್ಟರೂ ಅಂಥ ಶ್ಲೋಕಗಳನ್ನು ರಚಿಸಲು ಸಮರ್ಥರಾಗುತ್ತಿರಲಿಲ್ಲ.ಇವರು ಸುಮಾರು ಹದಿನೆಂಟು ವರ್ಷದವರಿದ್ದರು. ಆಗ ಉಡುಪಿಗೆ ಮಹಾಮಹೋಪಾಧ್ಯಾಯಾದಿ ಬಿರುದಾಂಕಿತರಾದ ವೇದಾಂತ ವಿಮರ್ಶಾತ್ಮಕ ಅನೇಕ ಸಂಸ್ಕೃತ ಗ್ರಂಥಗಳನ್ನು ಬರೆದು ಅದ್ವೈತ [...]

ಶ್ರೀ ವಿಶ್ವೇಶತೀರ್ಥರಿಗೆ ಕಾವ್ಯಕುಸುಮಾಂಜಲಿ

Wednesday, August 4th, 2010 - - 0 Comment

ಶ್ರೀವಿಶ್ವೇಶತೀರ್ಥ ಶ್ರೀಗಳಿಗೆ ಈ ಕಮಂಡಲು ತುಂಬ ಕರುಣೆಯಿದೆ; ಪ್ರೀತಿಯಿದೆ ಮೂರು ಲೋಕವನಳೆದ ಚರಣಕಮಲದೊಳಿಡುವ ಹೂಗಳಿವೆ. ವಿಠ್ಠಲನ ನೆನಪು ನಿಯನು ಕೊಡುವ ಹರಕೆಯಿದೆ. ಮುಗುಳುನಗೆ ಮೊಳೆತ ನಿರ್ಭೀತಿಯಿದೆ. ಕೊಳಲನೂದುವ ಗೊಲ್ಲಗೀವ ಕೆನೆ ಮೊಸರು ಇದೆ. ಕೊಟ್ಟಿಗೆಯ ಕರು ಬಿಚ್ಚಿ ಕೊರಳ ಹಗ್ಗವ ಹಿಡಿದು ಕಡಗೋಲು ಕೈಗೆತ್ತಿಕೊಂಡು ಮಧ್ವರಿಗೊಲಿದು- -ಬಂದಿರುವ ಹುಡುಗನಿಗೆ ಕೊಡುವ ಕೆನೆಹಾಲು ಇದೆ. ಮೂಲಮೂವತ್ತೇಳು ಗ್ರಂಥಗಳ ಮಕರಂದ ಇದರೊಳಿದೆ; ಬದರಿಯಲಿ ಬೆಳೆದ ವೃಕ್ಷದ ಹಣ್ಣು. ಸೌಜನ್ಯ ಕುಳಿತಿಹುದು ತೆರೆದು ತಿಳಿವಿನ ಕಣ್ಣು. ಬಿಡಿಸತೊಡಗಿದೆ ಮಾತು ಭವದ ಸಾವಿರಬಂಧ. [...]

QR Code Business Card