ಭಗವದ್ಗೀತಾ ಪ್ರವಚನ ಮಂಗಲೋತ್ಸವ – ಧಾರವಾಡ
Thursday, February 17th, 2011 - Vishveshavani - 0 Commentದಿನಾಂಕ ೧೫.೦೨.೨೦೧೧ ರಂದು ಧಾರವಾಡದ ಮಾಳಮಡ್ಡಿಯಲ್ಲಿನ ವನವಾಸಿ ರಾಮಮಂದಿರದಲ್ಲಿ ಸತ್ಯಕಾಮ ಸೇವಾಸಮಿತಿಯ ವತಿಯಿಂದ ನಡೆದ ಶ್ರೀಭಗವದ್ಗೀತಾ ಮಂಗಲ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳು ಉಪಸ್ಥಿತರಿದ್ದರು. ಧ್ಯಾನಪ್ರಮೋದ ಪ್ರಶಸ್ತಿ ವಿಜೇತರಾದ ಶ್ರೀಮಧ್ವಾಚಾರ್ಯ ಮೊಖಾಶಿ ಇವರಿಂದ ಭಗವದ್ಗೀತೆಯ ಕೊನೆಯ ಅಧ್ಯಾಯದ ಪ್ರವಚನ ನಡೆಯಿತು. ಶ್ರೀಗಳಿಗೆ ಸನ್ಮಾನ ಮತ್ತು ೮೦ ವರ್ಷಗಳ ಸುಸಂದರ್ಭದಲ್ಲಿ ನಾಣ್ಯಗಳಿಂದ ತುಲಾಭಾರ ಮಾಡಲಾಯಿತು. ಕೊನೆಯಲ್ಲಿ ಅನುಗ್ರಹಸಂದೇಶವನ್ನಿತ್ತ ಶ್ರೀಗಳು ನೆರೆದಿದ್ದ ಎಲ್ಲಾ ವಿದ್ವಾಂಸರಿಗೂ ಹಾರಹಾಕಿ ಫಲಮಂತ್ರಾಕ್ಷತೆಯನ್ನು ಕೊಟ್ಟರು.











