ಶ್ರೀಗಳ ಹುಟ್ಟುಹಬ್ಬದ ಪ್ರಯುಕ್ತ ಸಂಭ್ರಮಾಚರಣೆ: ಸಿರುಗುಪ್ಪ

ಶ್ರೀಗಳ ಹುಟ್ಟುಹಬ್ಬದ ಪ್ರಯುಕ್ತ ಸಂಭ್ರಮಾಚರಣೆ: ಸಿರುಗುಪ್ಪ

Wednesday, May 11th, 2011 - - 5 Comments

ದಿನಾಂಕ ೧೧.೦೫.೨೦೧೧ರಂದು ಬಳ್ಳಾರಿ ಜಿಲ್ಲೆಯಲ್ಲಿನ ಸಿರುಗುಪ್ಪದಲ್ಲಿ ಆರ್ಯವೈಶ್ಯ ಮಂಡಳಿಯ ವತಿಯಿಂದ ಶ್ರೀಶ್ರೀವಿಶ್ವೇಶತೀರ್ಥಶ್ರೀಪಾದರ ೮೦ನೇ ಹುಟ್ಟುಹಬ್ಬದ ನಿಮಿತ್ತ ಶ್ರೀಗಳಿಗೆ ತುಲಾಭಾರ, ಮುತ್ತಿನ ಅಭಿಷೇಕ ಹಾಗೂ ಧನ್ವಂತರಿ ಹೋಮಗಳನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮವು ತುಂಬಾ ವಿಜೃಂಭಣೆಯಿಂದ ನೆರವೇರಿತು. ಕುದುರೆಯ ಗಾಡಿಯಲ್ಲಿ ಶ್ರೀಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಭವ್ಯವಾದ ವೇದಿಕೆಯಲ್ಲಿ ಶ್ರೀನಿವಾಸ ಕಲ್ಯಾಣ ಹಾಗೂ ಶ್ರೀಗಳಿಗೆ ತುಲಾಭಾರ ಸಾವಿರಾರು ಜನರ ಸಮ್ಮುಖದಲ್ಲಿ ಬಹು ಅದ್ದೂರಿಯಾಗಿ ನೆರವೇರಿತು. ಭಕ್ತಾದಿಗಳು ಶ್ರೀಗಳಿಗೆ ಪಾದಪೂಜೆಯನ್ನು ನೆರವೇರಿಸಿದರು. ಶ್ರೀಗಳು ನೆರೆದಿದ್ದ ಭಕ್ತರಿಗೆಲ್ಲಾ ಫಲಮಂತ್ರಾಕ್ಷತೆಯನ್ನಿತ್ತು ಅನುಗ್ರಹಿಸಿದರು.

ಶ್ರೀ ವಿಜಯಧ್ವಜತೀರ್ಥರ ಆರಾಧನಾ ಮಹೋತ್ಸವ

ಶ್ರೀ ವಿಜಯಧ್ವಜತೀರ್ಥರ ಆರಾಧನಾ ಮಹೋತ್ಸವ

Sunday, May 8th, 2011 - - 1 Comment

ಭಾಗವತ ಗ್ರಂಥಕ್ಕೆ ವ್ಯಾಖ್ಯಾನವನ್ನು ಬರೆದ, ಪೇಜಾವರ ಮಠದ ಪರಂಪರೆಯಲ್ಲಿ ಬಂದ ಪ್ರಸಿದ್ಧಯತಿಗಳಾದ ಶ್ರೀ ವಿಜಯಧ್ವಜತೀರ್ಥರ ಆರಾಧನಾ ಮಹೋತ್ಸವವು ಇದೇ ವೈಶಾಖ ಶುದ್ಧ ತೃತೀಯಾ ದಿ. ೦೬.೦೫.೨೦೧೧ ರ ಶುಕ್ರವಾರದಂದು ಮಂಗಳೂರಿನ ಸಮೀಪದಲ್ಲಿರುವ ತಲಪಾಡಿ – ಮಂಜೇಶ್ವರದ ಮಧ್ಯದಲ್ಲಿರುವ ಶ್ರೀಕಣ್ವತೀರ್ಥಮಠದಲ್ಲಿ ನಡೆಯಿತು . ಅಂದು ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಭಜನೆ, ಪ್ರವಚನ ಮುಂತಾದ ಕಾರ್ಯಕ್ರಮಗಳು ನಡೆದು, ನಂತರ ಮಹಾಪೂಜೆ ನಡೆಯಿತು. ತಿರುಮಲ ತಿರುಪತಿ ದೇವಸ್ಥಾನದ ದಾಸಸಾಹಿತ್ಯ ಪ್ರಾಜೆಕ್ಟ್ ನ ಸಹಯೋಗದೊಂದಿಗೆ ಈ ಕಾರ್ಯಕ್ರಮವು ವೈಭವೋಪೇತವಾಗಿ ನೆರವೇರಿತು. ಬೆಳಗ್ಗೆ ಗಂ: [...]

ಉಡುಪಿಯಲ್ಲಿ ಬಾಬಾ ರಾಮ್ ದೇವ್ ಯೋಗ ಶಿಬಿರ

ಉಡುಪಿಯಲ್ಲಿ ಬಾಬಾ ರಾಮ್ ದೇವ್ ಯೋಗ ಶಿಬಿರ

Sunday, April 17th, 2011 - - 0 Comment

ಭಾರತ ಸ್ವಾಭಿಮಾನ ಯಾತ್ರೆ ಮತ್ತು ನಿಃಶುಲ್ಕ ಯೋಗ ಅಭಿಯಾನವನ್ನು ಭಾರತದಾದ್ಯಂತ ಕೈಗೊಳ್ಳುತ್ತಿರುವ ಬಾಬಾ ರಾಮ್‌ದೇವ್ ದಿನಾಂಕ ೧೭.೦೪.೨೦೧೧ರಂದು ಉಡುಪಿಯಲ್ಲಿ ಯೋಗ ಶಿಬಿರವನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಶ್ರೀಶ್ರೀವಿಶ್ವೇಶತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಅವರು ಮಾತನಾಡುತ್ತಾ ಹಿಂದೆ ಕಾಡಿನಲ್ಲಿದ್ದ ರಾಕ್ಷಸರ ದಮನಕ್ಕಾಗಿ ಶ್ರೀರಾಮನು ಅವತಾರವೆತ್ತಿದ, ಈಗ ನಾಡಿನಲ್ಲಿಯೇ ಅನೇಕ ರಾಕ್ಷಸರಿದ್ದಾರೆ , ಅವರೆಲ್ಲರ ನಾಶಕ್ಕಾಗಿ ನಮ್ಮ ದೇಶಕ್ಕೆ ಇಂತಹ ರಾಮದೇವನಿದ್ದಾನೆ ಎಂದರು. ಸುಮಾರು ಬೆಳಗ್ಗಿನ ೫.೦೦ ಘಂಟೆಯಿಂದ ೦೮.೦೦ ಘಂಟೆಯವರೆಗೆ ರಾಮ್‌ದೇವ್ ಅವರು ನಡೆಸಿಕೊಟ್ಟ ಯೋಗಶಿಬಿರವನ್ನು ಶ್ರೀಗಳು ಸಭೆಯಲ್ಲೇ ಕುಳಿತು ವೀಕ್ಷಿಸಿದರು.

ಗುಲ್ಬರ್ಗಾದಲ್ಲಿ ಸಂತ್ರಸ್ತರ  ನೆರವಿಗೆ ಶ್ರೀಗಳಿಂದ ಪಾದಯಾತ್ರೆ

ಗುಲ್ಬರ್ಗಾದಲ್ಲಿ ಸಂತ್ರಸ್ತರ ನೆರವಿಗೆ ಶ್ರೀಗಳಿಂದ ಪಾದಯಾತ್ರೆ

Sunday, April 10th, 2011 - - 0 Comment
ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ರುದ್ರದೇವರ  ಪ್ರತಿಷ್ಠೆ

ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ರುದ್ರದೇವರ ಪ್ರತಿಷ್ಠೆ

Wednesday, March 23rd, 2011 - - 0 Comment

Extra Shots:

ಯುಪಿಸಿಎಲ್ ಬಿಕ್ಕಟ್ಟು: ಉಪವಾಸ ಕೈಬಿಡದ ಶ್ರೀಗಳು

ಯುಪಿಸಿಎಲ್ ಬಿಕ್ಕಟ್ಟು: ಉಪವಾಸ ಕೈಬಿಡದ ಶ್ರೀಗಳು

Monday, March 21st, 2011 - - 0 Comment

21 Mar 2011 ಉದಯವಾಣಿ ಬೆಂಗಳೂರು ವರದಿ:

ಸ್ಥಾವರದಿಂದ  ಸಮಸ್ಯೆ ಮುಗಿಯದವರೆಗೆ ಉಪವಾಸ ನಿಲ್ಲದು

ಸ್ಥಾವರದಿಂದ ಸಮಸ್ಯೆ ಮುಗಿಯದವರೆಗೆ ಉಪವಾಸ ನಿಲ್ಲದು

Monday, March 21st, 2011 - - 0 Comment

20 Mar 2011 ಕನ್ನಡಪ್ರಭ ವರದಿ : 20 Mar 2011 ಉದಯವಾಣಿ ವರದಿ: 20 Mar 2011 ವಿಜಯಕರ್ನಾಟಕ ವರದಿ :

ನಾಗಾರ್ಜುನ ವಿರುದ್ಧ ದಿನದಲ್ಲಿ ಒಪ್ಪೊತ್ತು ಆಹಾರ

ನಾಗಾರ್ಜುನ ವಿರುದ್ಧ ದಿನದಲ್ಲಿ ಒಪ್ಪೊತ್ತು ಆಹಾರ

Wednesday, March 16th, 2011 - - 0 Comment

16 Mar 2011 ವಿಜಯಕರ್ನಾಟಕ ವರದಿ : 16 Mar 2011 ಉದಯವಾಣಿ ವರದಿ:

ಕಣ್ವತೀರ್ಥದಲ್ಲಿ  ನೂತನ ಜ್ಞಾನಮಂದಿರದ ಉದ್ಘಾಟನೆ

ಕಣ್ವತೀರ್ಥದಲ್ಲಿ ನೂತನ ಜ್ಞಾನಮಂದಿರದ ಉದ್ಘಾಟನೆ

Friday, March 11th, 2011 - - 0 Comment

ಕಣ್ವತೀರ್ಥದಲ್ಲಿ ದಿನಾಂಕ ೧೦.೦೩.೨೦೧೧ನೇ ಗುರುವಾರದಂದು ಶ್ರೀಶ್ರೀವಿಶ್ವೇಶತೀರ್ಥ ಶ್ರೀಪಾದರ ಅಮೃತಹಸ್ತದಿಂದ ನೂತನ ಜ್ಞಾನಮಂದಿರದ ಉದ್ಘಾಟನೆಯು ನೆರವೇರಿತು. ಆ ಜ್ಞಾನಮಂದಿರಕ್ಕೆ ಸೀತಾರಾಮ ಮಂದಿರ ಎಂಬುದಾಗಿ ಶ್ರೀಗಳು ಹೆಸರಿಟ್ಟರು. ಕಿರಿಯಶ್ರೀಪಾದರು ಹಾಗೂ ಕರ್ನಾಟಕ ಬ್ಯಾಂಕ್ ನ ಶ್ರೀಅನಂತಕೃಷ್ಣ ಭಟ್, ಎಮ್.ಆರ್.ಪಿ.ಎಲ್ ನ ಶ್ರೀಮತಿ ಲಕ್ಷ್ಮೀ ಕುಮಾರನ್, ಬದಿಯಡ್ಕದ ವಸಂತ ಪೈ, ಶ್ರೀನಾಗರಾಜ ಶೆಟ್ಟಿ, ಶ್ರೀಜಯಪಾಲಶೆಟ್ಟಿ, ಶ್ರೀಕೃಷ್ಣಪ್ಪ ಬೆಂಗರೆ ಮುಂತಾದ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜ್ಞಾನಮಂದಿರವು ಸುಂದರವಾಗಿದ್ದು ಕೆಳಭಾಗದಲ್ಲಿ ದೂರದಿಂದ ಬರುವ ಭಕ್ತಾದಿಗಳಿಗಾಗಿ ಕೊಠಡಿಯ ವ್ಯವಸ್ಥೆಯನ್ನೂ ಮಾಡಲಾಗಿದೆ. ಸುಸಜ್ಜಿತವಾದ ಈ [...]

ನಾಸಿಕ್ ಶ್ರೀಪೇಜಾವರ ಮಠದಲ್ಲಿ ಪ್ರತಿಷ್ಠೆ.

ನಾಸಿಕ್ ಶ್ರೀಪೇಜಾವರ ಮಠದಲ್ಲಿ ಪ್ರತಿಷ್ಠೆ.

Tuesday, March 8th, 2011 - - 1 Comment

ದಿನಾಂಕ ೦೭-೦೩-೨೦೧೧ ರಂದು ಜಗದ್ಗುರುಶ್ರೀಮಧ್ವಾಚಾರ್ಯಸಂಸ್ಥಾನ ಶ್ರೀಪೇಜಾವರ ಅಧೋಕ್ಷಜ ಮಠವು ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ತಮ್ಮ ಮಠದ ಶಾಖೆ ಸೀತಾರಾಮಪ್ರತಿಷ್ಠಾನ ಭವನದಲ್ಲಿ ನೂತನವಾಗಿ ಶ್ರೀಸೀತಾಲಕ್ಷ್ಮಣಸಹಿತ ರಾಮದೇವರು ಹಾಗೂ ಆಂಜನೇಯ ವಿಗ್ರಹಳು ಮತ್ತು ರಾಯರ ವೃಂದಾವನದ ಪ್ರತಿಷ್ಠೆಯನ್ನು ಶ್ರೀಶ್ರೀವಿಶ್ವೇಶತೀರ್ಥಶ್ರೀಪಾದರು ಹಾಗೂ ಶ್ರೀಶ್ರೀವಿಶ್ವಪ್ರಸನ್ನತೀರ್ಥಶ್ರೀಪಾದರುರು ನೆರವೇರಿಸಿದರು. ಮುಂಬೈ, ನಾಸಿಕ್, ಠಾಣೆ, ಡೊಂಬಿವಿಲಿ ಮುಂತಾದ ಕಡೆಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾದರು ಹಾಗೂ ಪ್ರಸಾದಸ್ವೀಕರಿಸಿದರು.

QR Code Business Card