ದಿನಾಂಕ ೨೭.೧೦.೨೦೧೦ರಂದು ತಿರುಪತಿಯಲ್ಲಿ ಶ್ರೀಶ್ರೀವಿಶ್ವೇಶತೀರ್ಥ ಶ್ರೀಪಾದರು ತಾವು ನಿರ್ಮಿಸಲು ಹೊರಟಿರುವ “ಉಡುಪಿಛತ್ರ”ದ ಕಟ್ಟಡಕ್ಕೆ ಶಿಲಾನ್ಯಾಸ ಮಾಡಿದರು. ಈ ಉಡುಪಿಛತ್ರವು ತಿರುಪತಿಬೆಟ್ಟದ ಕೆಳಭಾಗದಲ್ಲಿದ್ದು ಇದನ್ನು ಶ್ರೀಗಳು ತಮ್ಮ ರಾಮವಿಟ್ಠಲ ಟ್ರಸ್ಟ್ ವತಿಯಿಂದ ೧೬,೦೦೦ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಿದ್ದಾರೆ. ಮಧ್ಯಾನ್ಹ ೧೨-೧೫ ಘಂಟೆಯ ಮಕರ ಲಗ್ನದಲ್ಲಿ ಶ್ರೀಪಾದರು ತಮ್ಮ ಅಮೃತ ಹಸ್ತದಿಂದ ಭೂಮಿಪೂಜೆ ಹಾಗೂ ಶಂಕುಸ್ಥಾಪನೆಯನ್ನು ನಡೆಸಿದರು. ತದನಂತರ ಭಕ್ತಾದಿಗಳಿಗೆ ರಾಘವೇಂದ್ರ ಮಠದಲ್ಲಿ ಶ್ರೀಗಳಿಂದ ತೀರ್ಥಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.